
ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ವೇಳಾಪಟ್ಟಿ 2023: ಪರೀಕ್ಷೆ ದಿನಾಂಕ
August 12, 2022ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ: ಅರ್ಹತೆ ಮತ್ತು ಪ್ರವೇಶ ಪ್ರಕ್ರಿಯೆ 2022-23: ಕರ್ನಾಟಕದಲ್ಲಿ ಉನ್ನತ ಮಾಧ್ಯಮಿಕ ಶಿಕ್ಷಣವನ್ನು ಪ್ರಿ-ಯೂನಿವರ್ಸಿಟಿ ಕೋರ್ಸ್ (PUC) ಅಂದರೆ ಪದವಿಪೂರ್ವ ಶಿಕ್ಷಣ ಎಂದು ಕರೆಯಲಾಗುತ್ತದೆ. ಪದವಿ ಪೂರ್ವ ಕೋರ್ಸ್ 2 ವರ್ಷಗಳ ಅವಧಿಯದ್ದಾಗಿದ್ದು, ಮೊದಲ ವರ್ಷವನ್ನು ಪ್ರಥಮ ಪಿಯುಸಿ ಎಂದೂ, ಎರಡನೇ ವರ್ಷವನ್ನು ದ್ವಿತೀಯ ಪಿಯುಸಿ ಎಂದೂ ಕರೆಯಲಾಗುತ್ತದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಪಡೆಯಲು 2 ನೇ ಪಿಯುಸಿ ಅಥವಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ನಿರ್ಣಾಯಕವಾಗಿದೆ.
ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು, ಕರ್ನಾಟಕ ರಾಜ್ಯಾದ್ಯಂತ ಸರ್ಕಾರಿ ಮತ್ತು ಅನುದಾನಿತ ಪಿಯು ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸುತ್ತದೆ. ಅಲ್ಲದೆ, ಈ ವಿದ್ಯಾರ್ಥಿಗಳು ಪ್ರಥಮ ಮತ್ತು ದ್ವಿತೀಯ ಪಿಯುಸಿಗೆ ಪ್ರವೇಶ ಪಡೆಯಲು ಹೊಂದಿರಬೇಕಾದ ಅರ್ಹತೆಗಳು, ಶುಲ್ಕ ವಿವರ, ನೋಂದಣಿ ಸೇರಿದಂತೆ ಪದವಿ ಪೂರ್ವ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಇಲಾಖೆಯೇ ನಿರ್ಧರಿಸುತ್ತದೆ. ಅದರ ಒಂದು ನೋಟ ಇಲ್ಲಿದೆ.
ಈ ಲೇಖನದಲ್ಲಿ ನಾವು ವಿದ್ಯಾರ್ಥಿ ಜೀವನದ ಮಹತ್ವದ ಹಂತವಾದ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪ್ರವೇಶಕ್ಕೆ ವಿದ್ಯಾರ್ಥಿಗಳು ಹೊಂದಿರಬೇಕಾದ ಅರ್ಹತೆಗಳೇನು ಎಂಬುದರ ಬಗ್ಗೆ ವಿವರವಾಗಿ ತಿಳಿಯೋಣ. ಮೊದಲು ದ್ವಿತೀಯ ಪಿಯುಸಿ ಪ್ರವೇಶಕ್ಕೆ ಹೊಂದಿರಬೇಕಾದ ಅರ್ಹತೆಗಳ ಬಗ್ಗೆ ನೋಡೋಣ.
09.06.2022 | ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳಿಗೆ ಸಿದ್ಧಪಡಿಸಿಕೊಂಡ ವೇಳಾಪಟ್ಟಿಯಂತೆ ತರಗತಿಗಳು ಪ್ರಾರಂಭ. |
---|---|
20.06.2022 | ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿಗಳ ಪ್ರಾರಂಭ |
17.08.2022 ರಿಂದ 20.08.2022 ರವರೆಗೆ | ಪ್ರಥಮ ಕಿರು ಪರೀಕ್ಷೆ (ಪ್ರಥಮ ಮತ್ತು ದ್ವಿತೀಯ ಪಿಯುಸಿ) |
12.09.2022 | ಮೊದಲನೇ ಹಾಜರಾತಿ ಕೊರತೆ ಪಟ್ಟಿ ಪ್ರಕಟಣೆ, ಮಾಹಿತಿಯನ್ನು ಹೋಷಕರ ಗಮನಕ್ಕೆ ತರುವುದು. |
16.09.2022 | ಪೋಷಕರ – ಉಪನ್ಯಾಸಕರ ಮೊದಲನೇ ಸಭೆ. (ಹಾಜರಾತಿ ಕೊರತೆ ಹಾಗೂ ಶೈಕ್ಷಣಿಕ ಪ್ರಗತಿ ಕುರಿತು). |
19.09.2022 ರಿಂದ 30.09.2022 | ಮಧ್ಯವಾರ್ಷಿಕ ಪರೀಕ್ಷೆ. (ಪ್ರಥಮ ಮತ್ತು ದ್ವಿತೀಯ ಪಿಯುಸಿ). |
01.10.2022 ರಿಂದ 12.10.2022 | ಮಧ್ಯಂತರ ರಜೆ. |
13.10.2022 | ಮಧ್ಯಂತರ ರಜೆಯ ನಂತರ ತರಗತಿಗಳ ಮನರಾರಂಭ. |
10.12.2022 | ಎರಡನೇ ಹಾಜರಾತಿ ಕೊರತೆ ಪಟ್ಟಿ ಪಕಟಣೆ, ಮಾಹಿತಿಯನ್ನು ಪೋಷಕರ ಗಮನಕ್ಕೆ ತರುವುದು. |
15.12.2022 | ಪೋಷಕರ – ಉಪನ್ಯಾಸಕರ ಎರಡನೇ ಸಭೆ. (ಹಾಜರಾತಿ ಕೊರತೆ ಹಾಗೂ ಶೈಕ್ಷಣಿಕ ಪ್ರಗತಿ ಕುರಿತು). |
19.12.2022 ರಿಂದ 22.12.2022 | ಎರಡನೇ ಕಿರು ಪರೀಕ್ಷೆ. (ಪ್ರಥಮ ಮತ್ತು ದ್ವಿತೀಯ ಪಿಯುಸಿ). |
12.01.2023 ರಿಂದ 21.01.2023 | ಪ್ರಥಮ ಪಿಯುಸಿ ವಾರ್ಷಿಕ ಪ್ರಾಯೋಗಿಕ ಪರೀಕ್ಷೆಗಳು. |
21.01.2023 | ಪ್ರಥಮ ಮತ್ತು ದ್ವಿತೀಯ ಪಿಯುಸಿ ಅಂತಿಮ ಹಾಜರಾತಿ ಕೊರತೆ ಪಟ್ಟಿ ಪ್ರಕಟಣೆ, ಮಾಹಿತಿಯನ್ನು ಕಡ್ಡಾಯವಾಗಿ ಅಂಚೆಮೂಲಕ ಪೋಷಕರ ಗಮನಕ್ಕೆ ತರುವುದು. |
27.01.2023. | ಪೋಷಕರ – ಉಪನ್ಯಾಸಕರ ಮೂರನೇ ಸಭೆ (ಹಾಜರಾತಿ ಕೊರತೆ ಹಾಗೂ ಶೈಕ್ಷಣಿಕ ಪ್ರಗತಿ ಕುರಿತು). |
23.01.2023 ರಿಂದ 04.02.2023 | ದ್ವಿತೀಯ ಪಿಯುಸಿ ಪೂರ್ವಸಿದ್ಧತಾ ಪರೀಕ್ಷೆಗಳು. |
06.02.2023 ರಿಂದ 18.02.2023 | ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳು, |
20.02.2023 ರಿಂದ 04.03.2023 ರವರೆಗೆ | ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಗಳು. |
20.03.2023 ರಿಂದ 15.04.2023 ರವರೆಗೆ | ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಪ್ರಾರಂಭ. |
06.03.2023 ರಿಂದ 15.03.2023 ರವರೆಗೆ | ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ. |
16.03.2023 ರಿಂದ 21.03.2023 ರವರೆಗೆ | ಪ್ರಥಮ ಪಿಯುಸಿ ಫಲಿತಾಂಶ ಪಟ್ಟಿಯನ್ನು ಜಿಲ್ಲಾ ಉಪನಿರ್ದೇಶಕರ ಅನುಮೋದನೆಗಾಗಿ ಸಲ್ಲಿಸುವುದು. |
31.03.2023 | ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಣೆ. ಕೊನೆಯ ಕಾರ್ಯನಿರತ ದಿನ. |
01.04.2023 ರಿಂದ | ಬೇಸಿಗೆ ರಜೆ ಪ್ರಾರಂಭ. |
ಮೇ ಮೊದಲನೆಯ ವಾರ | ಪ್ರಥಮ ಪಿಯುಸಿ ಪೂರಕ ಪರೀಕ್ಷೆ, |
ಮೇ ಮೂರನೇ ವಾರ | ಪ್ರಥಮ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಣೆ. |
ಪ್ರಥಮ ಪಿಯುಸಿಗೆ ದಾಖಲಾದ ವಿದ್ಯಾರ್ಥಿಯು ವಿಷಯ ಭಾಷೆಗಳ ಬದಲಾವಣೆಗೆ 2022 ಆಗಸ್ಟ್ ತಿಂಗಳ 10ನೇ ತಾರೀಖಿನೊಳಗೆ ಬದಲಾವಣೆ ಮಾಡಿಕೊಳ್ಳಲು ಅವಕಾಶವಿರುತ್ತದೆ, ಬದಲಾವಣೆ ಬಯಸುವ ವಿಷಯಗಳಲ್ಲಿ ಕನಿಷ್ಠ ಶೇ.75 ರಷ್ಟು ಹಾಜರಾತಿ ದೊರಕುವ ಬಗ್ಗೆ ಖಚಿತಪಡಿಸಿಕೊಂಡ ನಂತರ ಮಾತ್ರ ವಿಷಯ ಬದಲಾವಣೆಯನ್ನು ಪ್ರಾಚಾರ್ಯರ ಹಂತದಲ್ಲೇ ಮಾಡಿಕೊಳ್ಳತಕ್ಕದ್ದು, ಈ ವಿಚಾರವಾಗಿ ಯಾವುದೇ ವಿದ್ಯಾರ್ಥಿಯನ್ನು ನಿರ್ದೇಶನಾಲಕ್ಕೆ ಕಳುಹಿಸಬಾರದು.
ಪ್ರ. 1: ವಲಸೆ ಪ್ರಮಾಣಪತ್ರ ಎಂದರೇನು? ಇದನ್ನು ಯಾರು ಸಲ್ಲಿಸಬೇಕು?
ಉತ್ತರ: ಕರ್ನಾಟಕ ರಾಜ್ಯದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಇತರೆ ವಿದ್ಯಾರ್ಥಿಗಳು ಮೂಲ ವಲಸೆ ಪ್ರಮಾಣಪತ್ರ (Original Migration Certificate) ಸಲ್ಲಿಸಬೇಕಾಗುತ್ತದೆ.
ಪ್ರ. 2: ತಾತ್ಕಾಲಿಕ ಅರ್ಹತಾ ಪತ್ರ ಯಾರಿಗೆ ನೀಡಲಾಗುತ್ತದೆ?
ಉತ್ತರ: ವಿದೇಶಗಳಲ್ಲಿ ಕರ್ನಾಟಕ ರಾಜ್ಯದ ಎಸ್ಎಸ್ಎಲ್ಸಿ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಕೇಂದ್ರ ಕಚೇರಿಯಿಂದ ತಾತ್ಕಾಲಿಕ ಅರ್ಹತಾ ಪತ್ರವನ್ನು ಅಭ್ಯರ್ಥಿಗಳಿಗೆ ನೀಡಲಾಗುತ್ತದೆ. ಇಲಾಖೆಯಿಂದ ತಾತ್ಕಾಲಿಕ ಅರ್ಹತಾ ಪತ್ರವನ್ನು ಪಡೆಯದಿರುವ ವಿದ್ಯಾರ್ಥಿಗಳ ದಾಖಲಾತಿಯನು ರದ್ದುಪಡಿಸಲಾಗುತ್ತದೆ.
ಪ್ರ. 3: ಎಸ್.ಎಸ್.ಎಲ್.ಸಿ ಮೂಲ ವರ್ಗಾವಣೆ ಪ್ರಮಾಣ ಪತ್ರ ಕಳೆದುಹೋಗಿದ್ದರೆ ಏನು ಮಾಡಬೇಕು?
ಉತ್ತರ: ಆಯಾ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶಾಲೆಯಿಂದ ಮೂಲ ವರ್ಗಾವಣೆ ಪ್ರಮಾಣಪತ್ರ ಪಡೆದು ಪ್ರಥಮ ಪಿಯುಸಿ ತರಗತಿಗೆ ದಾಖಲಾಗುವ ಮೊದಲೇ ಅಚಾತುರ್ಯದಿಂದ ಮೂಲ ವರ್ಗಾವಣೆ ಪತ್ರ ಕಳೆದುಕೊಂಡಿದ್ದರೆ, ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ನಂತರ ಕಾಲೇಜುಗಳಲ್ಲಿ ನಿಯಮಾನುಸಾರ ಅರ್ಜಿ ಸಲ್ಲಿಸಬೇಕು. ನಿರ್ದೇಶನಾಲಯದ ಪೂರ್ವಾನುಮತಿ ಪಡೆದು ನಂತರ ವಿದ್ಯಾರ್ಥಿಯನ್ನು ದಾಖಲಾತಿ ಮಾಡಿಕೊಳ್ಳಲಾಗುತ್ತದೆ.
ಪ್ರ. 4: ರಾಷ್ಟ್ರೀಯ ಮುಕ್ತ ಶಿಕ್ಷಣ ಸಂಸ್ಥೆ(ಎನ್ಐಒಎಸ್)ಯಿಂದ 10ನೇ ತರಗತಿ ಪಾಸಾದವರು ಪಿಯುಸಿ ಪ್ರವೇಶಕ್ಕೆ ಅರ್ಹರೇ?
ಉತ್ತರ: ಹೌದು. ರಾಷ್ಟ್ರೀಯ ಮುಕ್ತ ಶಿಕ್ಷಣ ಸಂಸ್ಥೆಯ ಹತ್ತನೇ ತರಗತಿಯನ್ನು ಎಸ್.ಎಸ್.ಎಲ್.ಸಿಗೆ ತತ್ಸಮಾನವಾದ ಅರ್ಹತೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಅನುಮೋದನೆ ನೀಡಿದೆ.
ಪ್ರ. 5: ತಾತ್ಕಾಲಿಕ ಅಂಕಪಟ್ಟಿ ಆಧಾರದ ಮೇಲೆ ದಾಖಲಾತಿ ಮಾಡಿಕೊಳ್ಳಲಾಗುತ್ತದೆಯೇ?
ಉತ್ತರ: ಇಲ್ಲ. ಪರೀಕ್ಷಾ ಫಲಿತಾಂಶ ಪ್ರಕಟವಾಗುವುದಕ್ಕೂ ಮೊದಲು ಶಾಲೆಯವರು ನೀಡುವ ತಾತ್ಕಾಲಿಕ ಅಂಕಪಟ್ಟಿಯ ಆಧಾರದ ಮೇಲೆ ದಾಖಲಾತಿ ಮಾಡಿಕೊಳ್ಳುವಂತಿಲ್ಲ.
ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ: ಅರ್ಹತೆ ಮತ್ತು ಪ್ರವೇಶ ಪ್ರಕ್ರಿಯೆ 2023ರ ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್ಡೇಟ್ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. “ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ: ಅರ್ಹತೆ ಮತ್ತು ಪ್ರವೇಶ ಪ್ರಕ್ರಿಯೆ 2022-23” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.